ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮೂಡಂಬೈಲು ಶಾಸ್ತ್ರಿ ಆಯ್ಕೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ನವ೦ಬರ್ 19 , 2014
|
ನವ೦ಬರ್ 19, 2014
|
ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮೂಡಂಬೈಲು ಶಾಸ್ತ್ರಿ ಆಯ್ಕೆ
ಪುತ್ತೂರು :
ಜನವರಿ 2,3,4 2015ರಂದು ಪುತ್ತೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಯಕ್ಷಗಾನ-ಬಯಲಾಟ ದಶಮಾನೋತ್ಸವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಯಕ್ಷಗಾನ ಆರ್ಥಧಾರಿ, ನಿವೃತ ಶಿಕ್ಷಕ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ.
ನಟರಾಜ ವೇದಿಕೆಯಲ್ಲಿ ಸ್ವಾಗತ ಸಮಿತಿಯ ಸಭೆಯಲ್ಲಿ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಯಸ್.ಯನ್. ಪಂಜಾಜೆ ಆಯ್ಕೆಯನ್ನು ಪ್ರಕಟಿಸಿ, ಮೂರುದಿನ ಪರ್ಯಂತ ಕರ್ನಾಟಕದ ಎಲ್ಲ ಯಕ್ಷಗಾನ ಪ್ರಕಾರಗಳ ಪ್ರಾತ್ಯಕ್ಷಿತೆ, ವಿಚಾರಗೋಷ್ಠಿ, ಬಯಲಾಟ, ಮಹಿಳಾ ಯಕ್ಷಗಾನ, ತಾಳಮದ್ದಳೆ, ಯಕ್ಷಗಾನ ಕಲಾವಿದರ ಸನ್ಮಾನವನ್ನು ನಡೆಸಲಾಗುವುದೆಂದರು.
ಸಭೆಯ ಅಧ್ಯಕ್ಷತೆಯನ್ನು ಸಮ್ಮೇಳನ ಸಮಿತಿಯ ಗೌರವ ಅಧ್ಯಕ್ಷ ಮುಳಿಯ ಶ್ಯಾಮ ಭಟ್ ವಹಿಸಿದ್ದರು. ಕಾರ್ಯಾಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ ಪುತ್ತೂರಿನಲ್ಲಿ ಯಕ್ಷಗಾನ ಸಮ್ಮೇಳನ ಯಶಸ್ವಿಯಾಗಿ ಜರಗಲು ವಿವಿಧ ಸಮಿತಿಗಳನ್ನು ರಚಿಸಿಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು. ಗದಗ ಜಿಲ್ಲೆಯ ಕಲಾವಿದ ಎಸ್.ಸಿ.ಅಮರ ಶೆಟ್ಟಿ ಹಿಂದಿನ ಸಮ್ಮೇಳನಗಳು ನಡೆದು ಬಂದ ರೀತಿಯನ್ನು ತಿಳಿಸಿದರು. ಸಮ್ಮೇಳನ ಸಮಿತಿಯ ಉಪಾಧ್ಯಕ್ಷ ಕಜೆ ಈಶ್ವರ ಭಟ್, ಚಿದಾನಂದ ಕಾಮತ್ ಕಾಸರಗೋಡು, ವಿ.ಬಿ.ಅರ್ತಿಕಜೆ, ವಿ.ಜಿ.ಭಟ್, ದಾಸಪ್ಪ ರೈ, ಬಿ.ಐತ್ತಪ್ಪ ನಾಯ್ಕ್, ಎಂ.ನಾ.ಚಂಬಲ್ತಿಮಾರ್, ಪಿ.ಹರಿಶ್ಚಂದ್ರ ಆಚಾರ್ಯ ಉಪ್ಪಿನಂಗಡಿ, ಮಹೇಶ ಕನ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಾರ್ಯ ಸ್ವಾಗತಿಸಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.
ಕೃಪೆ :
http://www.suddinews.com
|
|
|